Sunday, March 11, 2007

ಮರಳಿ ಜನಪದಕ್ಕೆ

ಇತ್ತೀಚೆಗೆ ಜನಪದ ಕವಿ ಚಂದ್ರಶೇಖರ ಕಂಬಾರರು ಒಂದು ಸಂದರ್ಶನದಲ್ಲಿ ಹೇಳಿದ ಮಾತು 'ನನ್ನ ತಾಯಿ ಮತ್ತು ಅಜ್ಜಿಯರಿಗೆ ತಿಳಿದಿದ್ದ ಪ್ರತಿಶತ ೧೦ರಷ್ಟು ಜನಪದ ಸಾಹಿತ್ಯ ನನಗೆ ಗೊತ್ತಿಲ್ಲ!' ಕಂಬಾರರು ಶ್ರೇಷ್ಠ ಜನಪದ ಕವಿ. ಅವರು ಈ ಮಾತು ಹೇಳಬೇಕಿದ್ದರೆ ಒಂದು ಕಾಲದಲ್ಲಿ ಈ ನಾಡಿನ ಜನಪದ ಕಲೆ, ಸಂಸ್ಕೃತಿ ಎಷ್ಟು ಚಂದ ಇತ್ತು!


'ಜಾನಪದ ಜಾತ್ರೆ' ಸುವರ್ಣ ಕರ್ನಾಟಕದ ಅರ್ಥಪೂರ್ಣ ಆಚರಣೆಯತ್ತ ಸರ್ಕಾರ ಆಯೋಜಿಸಿರುವ ಉತ್ತಮ ಕಾರ್ಯಕ್ರಮಗಳಲ್ಲೊಂದು. ಜಾನಪದ ಕಲೆಗಳು ಶೀಘ್ರವಾಗಿ ಮರೆಯಾಗುತ್ತಿರುವ ಈ ಕಾಲದಲ್ಲಿ, ಮುಖ್ಯಮಂತ್ರಿ ಕುಮಾರಸ್ವಾಮಿಯವರು ಇದಕ್ಕೆ ಸ್ವತ: ಪ್ರೋತ್ಸಾಹ ನೀಡಿ ವಿಶೇಷ ಹಣ ಬಿಡುಗಡೆ ಮಾಡಿರುವುದು ಸಂತಸ ತರುವ ಸಂಗತಿ. ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ, ಅವರಿಗೊಂದು ವೇದಿಕೆ ಸಿಕ್ಕಿರುವುದು, ಸ್ವಲ್ಪ ಮಟ್ಟಿನ ಆರ್ಥಿಕ ಸಹಾಯ ದೊರೆತಿರುವುದು ಜಾನಪದ ಕಲೆ ಮತ್ತು ಸಾಹಿತ್ಯದ ಪುನರುತ್ಥಾನಕ್ಕೆ ಸರಿಯಾದ ದಿಕ್ಕು ಸಿಕ್ಕಿದೆಯೆನಿಸುತ್ತದೆ. ಇದಕ್ಕೆ ಉತ್ತಮ ಉದಾಹರಣೆ, ಕೊಡಗಿನ ಒಂದು ಜನಪದ ಕಲೆ ವಿನಾಶದಂಚಿನಿಂದ ಮೇಲೆದ್ದಿದೆ.

ಬೆಂಗಳೂರಿನ ಲಾಲ್ ಬಾಗ್ ಪ್ರತಿ ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ಭಾನುವಾರಗಳಂದು ಸಂಜೆ ೬ ರಿಂದ ೮:೩೦ ವರೆಗೆ ಕಾರ್ಯಕ್ರಮವಿರುತ್ತದೆ. ರಾಜ್ಯದ ಬೇರೆ ಜಿಲ್ಲೆಗಳಿಗೂ ಈ ಕಾರ್ಯಕ್ರಮವನ್ನು ಒಯ್ಯುವ ಯೋಜನೆಯಿದೆ.

ಪ್ರತಿ ಕಾರ್ಯಕ್ರಮಕ್ಕೂ ಸಾವಿರಾರು ಜನ ಸೇರುವುದೇ ಇದರ ಬಗ್ಗೆ ಜನಗಳಲ್ಲಿರುವ ಆಸಕ್ತಿಗೆ ಸಾಕ್ಷಿ.






ವೀರಗಾಸೆ, ಗೀಗೀ ಪದ, ಸಣ್ಣಾಟ, ದೊಡ್ಡಾಟ, ಹೆಜ್ಜೆ ಮೇಳ, ಹಾಲಕ್ಕಿ ಸುಗ್ಗಿ ಕುಣಿತ, ಜಡೆ ಕೋಲಾಟ, ಲಂಬಾಣಿ ಕುಣಿತ, ಕರಡಿ ಮಜಲು, ಕಿನ್ನರಿ ಜೋಗಿ ಮೇಳ, ಜಾನಪದ ನೃತ್ಯ..ಇತ್ಯಾದಿ ಕರ್ನಾಟಕದ ಹಲವಾರು ಜನಪದ ಪ್ರಾಕಾರಗಳ ಪ್ರದರ್ಶನವಿರುತ್ತದೆ.


ಪ್ರತಿ ವಾರಾಂತ್ಯದ theme ಬೇರೆ ಇರುತ್ತದೆ. ಆದ್ದರಿಂದ ಒಮ್ಮೆ ಹೋಗಿದ್ದರೂ ಪ್ರತಿ ತಿಂಗಳೂ ಒಮ್ಮೆ ಹೋದರೆ, ನಿಮಗೆ ಮನೋರಂಜನೆ, ಸ್ಥಳೀಯ ಕಲೆಗೆ ಪ್ರೋತ್ಸಾಹ ದೊರೆಯುತ್ತದೆ.

No comments: