Sunday, March 18, 2007

ಆವರಣ ಸಂವಾದ - ೨ (AvaraNa saMvAda -2)

ಅಭಿಜ್ಞಾನ ಮತ್ತು ಗೋಖಲೆ ಸಾರ್ವಜನಿಕ ಶಿಕ್ಷಣ ಸಂಸ್ಥೆ ಮಾರ್ಚ್ ೧೮ರಂದು ಏರ್ಪಡಿಸಿದ್ದ 'ಆವರಣ ಸಂವಾದ'ದ ಚಿಕ್ಕ ವರದಿ.


ಉತ್ತಮ ಪ್ರಾರ್ಥನೆಯ ನಂತರ, ಎನ್.ಎಸ್.ಲಕ್ಷ್ಮಿನಾರಾಯಣ ಭಟ್ಟ, ದೇಶ ಕುಲಕರ್ಣಿ, ಬಾಲಸುಬ್ರಹ್ಮಣ್ಯ ಕಂಜರ್ಪಣೆ, ಸುಧಾ ಮೂರ್ತಿ, ರಘು, ಜಿ.ಬಿ. ಹರೀಶ ಆವರಣದ ಬಗೆಗಿನ ತಮ್ಮ ಅನಿಸಿಕೆಗಳನ್ನು ಹೇಳಿದರು.


ನಂತರ ಭೈರಪ್ಪನವರೊಡನೆ ಸಂವಾದವಿತ್ತು. ಸುಮಾರು ಪ್ರಶ್ನೆಗಳಿಗೆ ಭೈರಪ್ಪನವರು ದೀರ್ಘವಾಗಿ, ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಉತ್ತರಿಸಿದರು.


ಕೆಲವು ಪ್ರಶ್ನೆಗಳು ಮಾರ್ಚ್ ೪ ರಂದು ನಡೆದ ಸಂವಾದದಲ್ಲೂ ಬಂದಿದ್ದವು. ಅದರ ಪೂರ್ತಿ ವರದಿ ಇಲ್ಲಿದೆ.

ಇಸ್ಲಾಂ ಮತಾಂಧತೆಗೆ ಕಮ್ಯುನಿಸಂ ಉತ್ತರವಾ?

ಅದೊಂದೇ ಉತ್ತರ ಅಲ್ಲ - ಚೀನಾದ ಗಡಿಪ್ರದೇಶಗಳಲ್ಲಿ ಶರಿಯಾ ಕಾನೂನಿಗಾಗಿ ಒತ್ತಾಯಿಸುತ್ತಿರುವವನ್ನು ಸಮರ್ಥವಾಗಿ ಎದುರಿಸಿದ್ದಾರೆ. ಪ್ರಜಾಪ್ರಭುತ್ವದ ಅಮೆರಿಕ, ಇಂಗ್ಲೆಂಡ್ ಗಳೂ ಕೂಡ ಸಮಸ್ಯೆಯನ್ನು ಎದುರಿಸಿವೆ.

ಭೈರಪ್ಪನವರಿಂದ ಇನ್ನೊಂದು ಶ್ರೇಷ್ಠ ಕಾದಂಬರಿ ಬರಲಿದೆಯೇ?

ನನಗೂ ಆಸೆ! ಆದರೆ ಆವರಣ ಬಿಡ್ತಾ ಇಲ್ಲ. ವಿಮರ್ಶೆ, ಚರ್ಚೆಗೆ ನನ್ನನ್ನು ಕರೆದರೆ ಅದರಿಂದ ಈಚೆ ಬರೋಕ್ ಸಾಧ್ಯ ಇಲ್ಲ! ಹೊಸ ಕಾದಂಬರಿ ಬರೆಯುವಾಗ ಹಿಂದಿನ ಕಾದಂಬರಿ ಪೂರ್ಣ ಮರೆತು ಹೊಸ ತಯಾರಿ ನಡೆಸಬೇಕು. ಇಲ್ಲದಿದ್ರೆ ನನಗೆ ಸಮಾಧಾನ ಇರಲ್ಲ.

ಆವರಣ ಬರೆದ ಹಿನ್ನೆಲೆಯೇನು? ಇಲ್ಲಿನ ಪಾತ್ರಗಳು ನಿಜಜೀವನದ ವ್ಯಕ್ತಿಗಳೇ?..


೨೫ ವರ್ಷದ ಹಿಂದೆ 'ನಾನೇಕೆ ಬರೆಯುತ್ತೇನೆ'ಯಲ್ಲಿ ಎಲ್ಲ ಹೇಳಿದ್ದೀನಿ. ಮಂದ್ರದಲ್ಲಿ ಬರುವುದು 'ಸತ್ಯ ಮತ್ತು ಸೌಂದರ್ಯ'ವೇ. ಆದರೆ ನನ್ನ ಸಂಶೋಧನಾ ಲೇಖನವನ್ನು ಎಷ್ಟು ಜನ ಓದಿದಾರೆ? ನನ್ನ ಆಸಕ್ತಿ ಮತ್ತು ಬಲವೆಂದರೆ ಸಾಹಿತ್ಯ. 'ಮಂದ್ರ' ಬರೆದಾಗ ಕೆಲವರು ಯಾವ ಸಂಗೀತಗಾರನನ್ನು ಮೋಹನ್ ಲಾಲ್ ಪಾತ್ರ ಹೋಲುತ್ತದೆ ಎಂದೆಲ್ಲ ಹೇಳಲು ಶುರು ಮಾಡಿದ್ರು. ನನಗಿರುವ ಸಂಗೀತಗಾರರ ಜೊತೆಗಿನ ಒಡನಾಟ, ೪೦ ವರ್ಷಗಳ ಸಂಗೀತದ ಆಸಕ್ತಿ (ಕಲಿಯುವ ಯತ್ನ, ಹುಬ್ಬಳ್ಳಿ, ಮೈಸೂರು, ಅಹಮದಾಬಾದ್, ಮುಂಬೈ, ದೆಹಲಿ ಗಳಲ್ಲಿ ಸಂಗೀತ ಕಛೇರಿಗಳಿಗೆ ಹೋಗುತ್ತಿದ್ದುದು). ಅದೇ ರೀತಿ ಗೃಹಭಂಗದ ಪಾತ್ರಗಳ ಬಗೆಗೂ ಸಾಕಷ್ಟು ಚರ್ಚೆಯಾಯಿತು. ಆವರಣದ ನರಸಿಂಹೇಗೌಡರ ಪಾತ್ರದ ಬಗ್ಗೆ ಕೇಳಿದ್ರಿ - ಇದು ಕಾಲ್ಪನಿಕ. ಇತಿಹಾಸದ ಔರಂಗಜೇಬ್, ಟಿಪ್ಪು ಮುಂತಾದವು ನಿಜ ಪಾತ್ರಗಳು. ಮಿಕ್ಕೆಲ್ಲವೂ ನನ್ನ ಸೃಷ್ಟಿ.

'ಪ್ರವೇಶ'ದಲ್ಲಿ ಹೇಳಿರುವ ಸೋದರಿ ಲೇಖಕಿ, ಅವರ ಕುಟುಂಬ ಯಾರು?

ಸದ್ಯಕ್ಕೆ ಹೇಳಲ್ಲ. ಇಂಗ್ಲಿಷ್, ಹಿಂದಿಗೆ ಪುಸ್ತಕ ಅನುವಾದಗೊಳ್ಳುತ್ತಿದೆ. ನಂತರ ಸೂಕ್ತ ಸಮಯದಲ್ಲಿ ನಿಮಗೆ ತಿಳಿಯುತ್ತೆ!


ಮಾನವತಾವಾದವೇ ಉತ್ತರವಲ್ಲವೇ?

ಮಾನವತಾವಾದ ಎಂದರೇನು ? ಪಾಶ್ಚಾತ್ಯ ದೇಶಗಳ ಮಾನವತಾವಾದ ಬಹಳ ಸೀಮಿತ ಅರ್ಥವಿರುವದ್ದು. ಪ್ರಕೃತಿ ಸಂಪತ್ತು ಇರುವುದು
ಮನುಷ್ಯನ ಭೋಗಕ್ಕಾಗಿ ಮಾತ್ರ.
ಹಿಂದು, ಜೈನ, ಬೌದ್ಧ ಧರ್ಮಗಳಲ್ಲಿ ಹೇಳುವುದು ಎಲ್ಲದರಲ್ಲಿ ದೈವತ್ವವನ್ನು ಕಾಣುವುದು. (ಸೂ: ಈ ಪ್ರಶ್ನೆಗೆ ತುಂಬಾ ದೀರ್ಘವಾದ ಉತ್ತರ ಕೊಟ್ಟರು. ಅವರು ಹೇಳಿದ ontology, episthomology, metaphysical ಇತ್ಯಾದಿ, ಚೆನ್ನಾಗಿತ್ತು - ಆದರೆ ನೆನಪಿಗೆ ಬರ್ತಿಲ್ಲ ;-) ).



ಗಾಂಧಿವಾದ

ಬ್ರಿಟಿಷರ ಮೇಲಿನ ಕೋಪಕ್ಕಾಗಿ ಮೋಪ್ಲಾ ದಂಗೆಯಲ್ಲಿ ಮುಸ್ಲಿಮರು ಕೊಂದಿದ್ದು ಹಿಂದೂಗಳನ್ನು! ಖಿಲಾಫತ್ ಚಳವಳಿಯ ಅವಶ್ಯಕತೆ ಏನಿತ್ತು, appeasement ಆಗಿಂದಲೇ ಶುರು ಆಯ್ತು. ಮುಸ್ಲಿಮರ ಜೊತೆ ಹೋಗದಿದ್ದರೆ ಸ್ವಾತಂತ್ರ್ಯ ಹೋರಾಟ ಕಷ್ಟ ಎಂದುಕೊಂಡು ಗಾಂಧಿ ಟರ್ಕಿ ವಿಷಯದಲ್ಲಿ ಖಿಲಾಫತ್ ಚಳವಳಿಗೆ ಭಾರತದ ಬೆಂಬಲ ಸೂಚಿಸಿದರು. ಗಾಂಧೀಜಿಯವರು ಸುಳ್ಳಾಡಿದರು ಅಂತಲ್ಲ ಆದರೆ politically correct ಆಗಿರೋಕ್ಕೆ ಯತ್ನಿಸಿದರು.

ಚರ್ಚಿಲ್ ವಿಶ್ವ ಸಮರ ೨ ರ ಹೀರೊ, ಆದ್ರೆ ಅದರ ನಂತರದ ಚರ್ಚಿಲ್ ಮೇಲೆ ಗೌರವವಿದ್ದರೂ ಚುನಾವಣೆಯಲ್ಲಿ ಇಂಗ್ಲೆಂಡ್ ಜನತೆ ಅವನನ್ನು ಸೋಲಿಸಿದರು. ಏಕೆಂದರೆ ಈ ಯುದ್ಧದ ಹೀರೊ ಶಾಂತಿಯ ಸಮಯದಲ್ಲಿ ಇಂಗ್ಲೆಂಡ್ ಗೆ ಮಾಡಿದ ಕೆಲಸ ಕಡಿಮೆ. ನಮ್ಮಲ್ಲಿ ಹಾಗೆ ಎಲ್ಲಿ ಆಗತ್ತೆ? - ಒಬ್ಬ ಏನೋ ಒಂದು ಕೆಲ್ಸ ಮಾಡಿದ್ರೆ ಅವನೇ ಸರ್ವಸ್ವ ಎನ್ನೋ ಜನ ನಾವು!

ನಮ್ಮಲ್ಲಿ immature intellectuals ಜಾಸ್ತಿಯಾಗಿದ್ದಾರೆ!

ಐಟಿ-ಬಿಟಿ ಯ ಬಗ್ಗೆ ನಿಮ್ಮ ಅಭಿಪ್ರಾಯ.

ಇದರ ಅವಶ್ಯಕತೆಯಿದೆ. ಇಂದು ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡಲು ಕಂಪ್ಯೂಟರ್ ಜ್ಞಾನ ಇರಬೇಕು. ಕಲಿಯೋದಿಲ್ಲ ಅಂದ್ರೆ ಹಿಂದೆ ಉಳೀತೀವಿ. ಹೊಸದನ್ನು ಕಲಿತು ನಮ್ಮತನವನ್ನು ಉಳಿಸಿಕೊಂಡುಹೋಗುವುದೇ ಬುದ್ಧಿವಂತಿಕೆ.

ಕನ್ನಡ ಸಾಹಿತ್ಯಕ್ಕೆ ಸಂಸ್ಕೃತದ ಅವಶ್ಯಕತೆಯಿದೆಯೇ?


elementary ಸಂಸ್ಕೃತ ಗೊತ್ತಿಲ್ಲದೆ ಇದ್ರೆ ಏನೂ ಬರೆಯೋಕೆ ಸಾಧ್ಯವಿಲ್ಲ. ಇಂದಿನ ಅನೇಕ ಕನ್ನಡ ಅಧ್ಯಾಪಕರಿಗೆ ಸರಳ ವ್ಯಾಕರಣ (ಸಂಧಿ, ಸಮಾಸ, ಅಲ್ಪಪ್ರಾಣ, ಮಹಾಪ್ರಾಣ) ವೂ ಗೊತ್ತಿಲ್ಲ. ಭಾರತೀಯ ಕಾವ್ಯ, ಸಾಹಿತ್ಯ ಓದಲು ಸಂಸ್ಕೃತದ ಜ್ಞಾನ ಬೇಕು.

3 comments:

Archu said...

oLLeya prayatna..
samvaada attend maadalu aagadiddaroo, nimma blog odi, yella maahiti tiLidantaayitu..
thanks manju..

ಮಂಜು ಶಂಕರ್ said...

@ಅರ್ಚನಾ

ವಂದನೆಗಳು!

ಇನ್ನಷ್ಟು ಮಾಹಿತಿ ಕೊಡ್ಬೇಕು ಅನ್ನಿಸಿತ್ತು - ಸಮಯದ ಅಭಾವದಿಂದ ಆಗ್ಲಿಲ್ಲ..

ತೇಜಸ್ವಿನಿ ಹೆಗಡೆ said...

‘ಆವರಣ’ ಓದಿರುವೆ. ಪ್ರತಿಪುಟವೂ ದೀರ್ಘ ಆಲೋಚನೆಗೆ ನಮ್ಮನ್ನು ಎಳೆಯುತ್ತದೆ. ಭೈರಪ್ಪನವರ "ಭಿತ್ತಿ" ಓದಬೇಕೆಂದಿದೆ. ಮಾಹಿತಿಗಳಿಗೆ ಧನ್ಯವಾದಗಳು.